Skip to playerSkip to main content
  • 15 minutes ago
ಕಂಕೇರ್​​(ಛತ್ತೀಸ್‌ಗಢ): ಕಾಡಿನಿಂದ ದಾರಿ ತಪ್ಪಿದ ಕರಡಿಯೊಂದು ಗ್ರಾಮದ ಬಾವಿಗೆ ಬಿದ್ದಿರುವ ಘಟನೆ ನರಹರ್‌ಪುರ ಅರಣ್ಯ ವ್ಯಾಪ್ತಿಯ ಕುಸುಂಪನಿ ಗ್ರಾಮದಲ್ಲಿ ನಡೆದಿತ್ತು.ಬಾವಿಯೊಳಗೆ ಪ್ರಾಣಿಯೊಂದು ಗದ್ದಲ ಮಾಡುವ ಶಬ್ದವನ್ನು ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ, ಒಳಗೆ ನೋಡಿದಾಗ, ಕರಡಿಯೊಂದು ಒಳಗೆ ಬಿದ್ದಿರುವುದು ಕಂಡುಬಂದಿತ್ತು. ಬಾವಿಯಲ್ಲಿ ನೀರಿನ ಮಟ್ಟ ಕಡಿಮೆಯಿದ್ದಿದ್ದರಿಂದ ಕರಡಿ ಬದುಕುಳಿದಿತ್ತು. ತಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ, ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿತು. ನಿರಂತರ ಕಾರ್ಯಚರಣೆ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿ ತಂಡ ಬಲೆಯನ್ನು ಬಳಸಿ ಕರಡಿಯನ್ನು ಬಾವಿಯಿಂದ ಮೇಲಕ್ಕೆತ್ತುವಲ್ಲಿ ಸಫಲವಾಗಿದೆ.  ಅಪಾಯದಲ್ಲಿದ್ದ ಕರಡಿಯನ್ನು ಹೊರತೆಗೆದು ಬಲೆಯಿಂದ ಬಿಡುಗಡೆ ಮಾಡಿದ ತಕ್ಷಣ, ಅದು ಮಿಂಚಿನ ವೇಗದಲ್ಲಿ ಕಾಡಿನ ಕಡೆಗೆ ಓಡಿ ಹೋಯಿತು. ಕರಡಿ ಸಂಪೂರ್ಣವಾಗಿ ಆರೋಗ್ಯಕರವಾಗಿ ಕಾಣಿಸಿಕೊಂಡಿದ್ದು ಮತ್ತು ಸುರಕ್ಷಿತವಾಗಿ ತನ್ನ ವಾಸಸ್ಥಾನಕ್ಕೆ ಮರಳಿತು ಎಂದು ಅರಣ್ಯ ಇಲಾಖೆ ವರದಿ ಮಾಡಿದೆ. ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡ ನಂತರ ಗ್ರಾಮಸ್ಥರು ನಿಟ್ಟುಸಿರು ಬಿಟ್ಟರು. ಈ ಘಟನೆ ಬಳಿಕ ಅರಣ್ಯ ಇಲಾಖೆ ಗ್ರಾಮಸ್ಥರಿಗೆ ವನ್ಯಜೀವಿಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದೆ.  ಇದನ್ನೂ ಓದಿ: ಉತ್ತರ ಕನ್ನಡ: 15 ಅಡಿ ಉದ್ದದ ಬೃಹತ್ ಹೆಬ್ಬಾವು ಸೆರೆ- ವಿಡಿಯೋ

Category

🗞
News
Transcript
00:00Ha! Get it, come on! Get it! Get it!
00:05Ha! Get it!
00:06Ha! Get it, come on!
00:12Ha! Get it!
00:16Get it!
00:21I got to turn it, turn it, turn it, turn it.
Comments

Recommended