Skip to playerSkip to main content
  • 8 hours ago
ವೈನಾಡ್‌ನ ಮೆಪ್ಪಾಡಿ ಮತ್ತು ಕಲ್ಲಾಡಿ ಪ್ರದೇಶಗಳಲ್ಲಿ ಭಾರಿ ಮಳೆ ಮತ್ತು ಭೂಕುಸಿತ ಸಂಭವಿಸಿದ್ದು, ಮಿನಾಕ್ಷಿ ಸೇತುವೆಯಿಂದ ಎರಡು ಬಸ್‌ಗಳು ಕಂದಕಕ್ಕೆ ಬಿದ್ದಿವೆ. 24 ಗಂಟೆಗಳಲ್ಲಿ 265 ಮಿಲಿಮೀಟರ್ ಮಳೆ ಸುರಿದಿದ್ದು, ಸುರಂಗ ನಿರ್ಮಾಣ ಕಾಮಗಾರಿಯ ಮಣ್ಣು ಸರಿಯಾಗಿ ತೆರವು ಮಾಡದಿರುವುದು ಭೂಕುಸಿತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. 2024ರ ಮುಂಡಕ್ಕೈ-ಚೂರಲ್ಮಾಳ ದುರಂತದಲ್ಲಿ 300ಕ್ಕೂ ಹೆಚ್ಚು ಜನ ಜೀವ ಕಳೆದುಕೊಂಡಿದ್ದ ಅದೇ ಪ್ರದೇಶದಲ್ಲಿ ಮತ್ತೆ ದುರಂತ ಸಂಭವಿಸಿದೆ. ಕೇರಳ ಸರ್ಕಾರ ತುರ್ತು ಸಭೆ ನಡೆಸಿ ಜನರನ್ನು ಸ್ಥಳಾಂತರಿಸಲು ಆದೇಶ ನೀಡಿದ್ದು, ಮುಂದಿನ ಮೂರ್ನಾಲ್ಕು ದಿನ ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಇದೆ.

Category

🗞
News

Recommended