Skip to playerSkip to main content
  • 15 minutes ago
ದೊಡ್ಡಬಳ್ಳಾಪುರ : ಯಲಹಂಕ - ಹಿಂದೂಪುರ ರಾಜ್ಯ ಹೆದ್ದಾರಿ ಬಾಶೆಟ್ಟಿಹಳ್ಳಿಯ ಭಾರತ್ ಪೆಟ್ರೋಲ್ ಬಂಕ್ ಬಳಿ ಸಂಭವಿಸಿದ ರಸ್ತೆ ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ಝಲ್ ಎನ್ನಿಸುತ್ತದೆ.ಜೂನ್ 22ರ ಮಧ್ಯಾಹ್ನ 3:48ರ ಸಮಯದಲ್ಲಿ ಅಪಘಾತ ಸಂಭವಿಸಿದ್ದು, ಸ್ಕೂಟರ್​​ಗೆ ಕಾರು ಡಿಕ್ಕಿ ಹೊಡೆದು ನಂತರ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಗುದ್ದಿದೆ. ಅಪಘಾತದ ರಭಸಕ್ಕೆ ಸ್ಕೂಟರ್​​ನಲ್ಲಿದ್ದ ಅಪ್ಪ, ಅಮ್ಮ ಮತ್ತು ಮಗಳು ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತದಲ್ಲಿ ರಾಮಾಂಜಿನೇಯಲು (50), ಅನಿತಾ (38), ವೈಷ್ಣವಿ (12) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳು ರಾಮಾಂಜನೇಯಲು ಗೌರಿಬಿದನೂರು ಟೌನ್ ನಿವಾಸಿ. ದೊಡ್ಡಬಳ್ಳಾಪುರದ ಗಣೇಶ್ ಗ್ರ್ಯಾಂಡ್ ಹೊಟೇಲ್​​ನಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದರು. ಜೂನ್ 22 ರಂದು ಕೆಲಸಕ್ಕೆ ರಜೆ ಹಾಕಿದ ರಾಮಾಂಜನೇಯಲು ಸ್ಕೂಟರ್​​ನಲ್ಲಿ ಹೆಂಡತಿ ಅನಿತಾ, ಸಾಕು ಮಗಳಾದ ವೈಷ್ಣವಿಯೊಂದಿಗೆ ಹಾಗೂ ಮತ್ತೊಂದು ಬೈಕ್​ನಲ್ಲಿ ಹೆಂಡತಿಯ ಅಣ್ಣ ಮತ್ತು ಆತನ ಸಂಸಾರ ಯಲಹಂಕದ ಜಿಕೆವಿಕೆಯತ್ತ ಹೊರಟಿತ್ತು.  ತಾನೂ ಕೆಲಸ ಮಾಡುತ್ತಿದ್ದ ಗಣೇಶ್ ಗ್ರ್ಯಾಂಡ್​​ನಲ್ಲಿ ಊಟ ಮಾಡಿದ ಅವರು ಸ್ಕೂಟರ್​​ಗೆ ಪೆಟ್ರೋಲ್ ಹಾಕಿಸಲು ಪೆಟ್ರೋಲ್ ಬಂಕ್ ಬಳಿ ಹೋಗುತ್ತಿದ್ದ ವೇಳೆ ಎದುರಿಗೆ ಬಂದ ಕಾರು ಡಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟರ್​​ನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ.ಇದನ್ನೂ ಓದಿ : ಕಿತ್ತೂರಲ್ಲಿ ಭೀಕರ ರಸ್ತೆ ಅಪಘಾತ, ಮೂವರು ಕಾರ್ಮಿಕರ ದುರ್ಮರಣ: ಚಾಲಕನ ವಿರುದ್ಧ ಎಫ್ಐಆರ್

Category

🗞
News
Comments

Recommended